ನಾನು ನನ್ನ ಗೆಳೆಯರೊಂದಿಗೆ ಫೆಬ್ರವರಿ 8-10, 2017 ರಲ್ಲಿ ಮೈಸೂರಿನಿಂದ ತಿರುಪತಿಗೆ 56213/56214 ರಲ್ಲಿ ಮುಂಗಡ ಬುಕ್ಕಿಂಗ್ ಮಾಡಿಸಿ ಪ್ರಯಾಣಿಸಿದೆ. ಆದರೆ ಬೆಂಗಳೂರಿನಿಂದ-ಮೈಸೂರಿಗೆ ಪ್ರಯಾಣಿಸುವ 56214 ರೈಲು ಗಾಡಿಗೆ ಯಾವುದೇ ಟಿಕೆಟ್ ಪರೀಕ್ಷಕರು ಬೋಗಿಯೊಳಗೆ ಬಂದು ಪರಿಶೀಲನೆ ನಡೆಸಲಿಲ್ಲ. ಎಷ್ಟು ಮಂದಿ ಪ್ರಯಾಣಿಕರು ಟಿಕೆಟ್ ಪಡೆದಿದ್ದರೋ, ಇಲ್ಲವೋ ಗೊತ್ತಿಲ್ಲ. ರೈಲು ನಷ್ಟದಲ್ಲಿರದೆ, ಲಾಭಕ್ಕೆ ಬರಲು ಹೇಗೆ ಸಾಧ್ಯ. ಜೊತೆಗೆ ಮುಂಗಡ ಬುಕ್ಕಿಂಗ್ ಮಾಡಿಸಿದ ಪ್ರಯಾಣಿಕರು ಅನುಭವಿಷುವ ಯಾತನೆ ಹೇಳತೀರದು.